Friday, 2 February 2018

ಧರ್ಮ ಮತ್ತು ಧಮ್ಮಕ್ಕೆ ಇರುವ ವ್ಯತ್ಯಾಸವೇನು???

ಜೀವನದಲ್ಲಿ ಪದೇ...ಪದೇ ತಪ್ಪುಗಳನ್ನು, ಪಾಪ ಕೃತ್ಯಗಳನ್ನು ಮಾಡುವುದು ಹಾಗೂ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೋಮ,ಹವನ,ಜಪ,ತಪ ಪ್ರಾರ್ಥನೆ ಪೂಜೆ ಮತ್ತು ಧಾರ್ಮಿಕ ಗ್ರಂಥಗಳ ಪಠಣವನ್ನು ಮಾಡುವುದು. ಹಾಗೂ ಪರಿಹರಿಸಿಕೊಂಡ ನಂತರ  ಪುನಃ ಅದೇ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡುವುದು ಮತ್ತದೇ ಪುನರಾವರ್ತನೆ ಎಂಬಂತೆ ಪ್ರಾಯಶ್ಚಿತಾರ್ಥಕ್ಕಾಗಿ ಪರಿಹಾರ ಕಾರ್ಯಗಳನ್ನು ಮಾಡುವುದನ್ನು ಧರ್ಮವೆನ್ನುತ್ತಾರೆ. 

ಆದರೆ ಧಮ್ಮವೆಂದರೆ ಹಾಗಲ್ಲ ಭಗವಾನ್  ಬುದ್ಧನು ಭೋದಿಸಿದ  ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ನಾವು ಜೀವನದಲ್ಲಿ  ತಪ್ಪುಗಳನ್ನು ಮಾಡದಂತೆ, ಪಾಪಕೃತ್ಯಗಳನ್ನು ಮಾಡದಂತೆ, ಬುದ್ಧನು ಜಗತ್ತಿಗೆ ಸಾರಿದ ಸಂದೇಶವಾದ ( ಸ್ವಾತಂತ್ರ್ಯ,ಸಮಾನತೆ,ಸಹೋದರತೆ) ಶಾಂತಿ,ಸಮತೆ,ಸಹೋದರತೆ,ಮೈತ್ರಿ ,ಪ್ರಜ್ಞೆ ಹಾಗೂ ಕರುಣೆಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ  ಬುದ್ಧನ ಪಥದಲ್ಲಿ ಸಾಗುವುದನ್ನು  ಧಮ್ಮವೆನ್ನುತ್ತಾರೆ.

ಇದು ಇತರೇ ಧರ್ಮಕ್ಕೂ ಮತ್ತು ಭಗವಾನ್ ಬುದ್ಧ ಪ್ರತಿಪಾದಿಸಿದ ಧಮ್ಮಕ್ಕೂ ಇರುವ ವ್ಯತ್ಯಾಸವಾಗಿದ್ದು  ಜಗತ್ತಿನ ಎಲ್ಲಾ ಧರ್ಮಗಳು ದೇವಕೇಂದ್ರಿತವಾಗಿದ್ದರೆ ಭಗವಾನ್  ಬುದ್ಧನ ಧಮ್ಮವು ಮಾನವ ಕೇಂದ್ರಿತವಾಗಿದೆ...☸ 

☸ಧಮ್ಮಾನಂದ ಬೆಳ್ತಂಗಡಿ☸

ಅಂಗುಲಿಮಾಲನ ಕಥೆ


ಭಗವಾನ್ ಬುದ್ಧ ಇದ್ದ ಕಾಲದಲ್ಲಿ ಅಂಗುಲಿಮಾಲ ಎನ್ನುವ ಕುಖ್ಯಾತ ದರೋಡೆಕೋರನೂ ಇದ್ದ.ಆತ ಕಾಡಿನಲ್ಲಿ ಹಾದುಹೋಗುತ್ತಿದ್ದ ಜನರನ್ನು ಸುಲಿಗೆ ಮಾಡುತ್ತಿದ್ದ.ಅಷ್ಟೇ ಅಲ್ಲದೆ ಅವರ ಕೈ ಬೆರಳುಗಳನ್ನು ಕತ್ತರಿಸಿ ಅದನ್ನು ತನ್ನ ಕೊರಳಿಗೆ ಹಾರವನ್ನಾಗಿ ಮಾಡಿ ಹಾಕಿಕೊಳ್ಳುತ್ತಿದ್ದ.ಹೀಗಾಗಿಯೇ ಅವನಿಗೆ ಅಂಗುಲಿಮಾಲ ಎನ್ನುವ ಹೆಸರು ಬಂತು.ಹೀಗಿರಲು ಒಮ್ಮೆ ಭಗವಾನ್ ಬುದ್ಧರಿಗೆ ಕಾಡಿನ ಮೂಲಕ ಹಾದುಹೋಗಬೇಕಾಗಿ ಬಂತು.
ಅವರ ಶಿಷ್ಯರೆಲ್ಲರೂ ಭಯಗ್ರಸ್ಥರಾಗಿ ಹಿಂದೆ ಸರಿದರು, ಬುದ್ಧರಿಗೂ ಅಂಗುಲಿಮಾಲನ ಬಗ್ಗೆ ತಿಳಿಸಿದರು. ಆದರೆ ಬುದ್ಧ ತಮ್ಮ ನಿರ್ಧಾರದಲ್ಲಿ ಆಚಲರಾಗಿದ್ದರು. ಅವರು ಪ್ರಯಾಣಿಸುತ್ತಿದ್ದಾಗ ಶಿಷ್ಯರು ಹೆದರಿದಂತೆ ಅಂಗುಲಿಮಾಲ ಬುದ್ಧನಿಗೆ ತಡೆ ಒಡ್ಡಿದ. ಆದರೆ ಬುದ್ಧ ನಸುನಗುತ್ತಲೇ ಆತನಿಗೆ ತನ್ನ ಬಳಿ ಇದ್ದ ಎಲ್ಲಾ ವಸ್ತುವನ್ನೂ ನೀಡಿದರು. ಅಂಗುಲಿಮಾಲನಿಗೆ ಆಶ್ಚರ್ಯವೋ ಆಶ್ಚರ್ಯ.
ಆತ ಬುದ್ಧ ಅವರ ಮಾತಿಗೆ ಮನಸೋಲುತ್ತಾನೆ. ನಂತರ ಅವರಿಗೆ ಏನು ಬೇಕೆಂದು ಕೇಳುತ್ತಾನೆ.ಆಗ ಬುದ್ಧ ಅವರು ಎದುರಿಗಿದ್ದ ಮರವನ್ನು ತೋರಿಸಿ ಅದರ ಎಲೆಗಳನ್ನು ತಂದುಕೊಡುವಂತೆ ಕೇಳುತ್ತಾರೆ.ಅಂಗುಲಿಮಾಲನಿಗೆ ನಗಲು ಬಂದರೂ ಆತ ಎಲೆಗಳನ್ನು ಕಿತ್ತು ತಂದು ಬುದ್ಧನ ಕೈಯಲ್ಲಿ ಇಡುತ್ತಾನೆ.
ನಂತರ ಬುದ್ಧ ಅವರು ಅಂಗುಲಿಮಾಲನ ಬಳಿ ಅವನ್ನೆಲ್ಲ ಮಾತೆ ಸ್ವಸ್ಥಾನದಲ್ಲಿ ಇಡಲು ತಿಳಿಸುತ್ತಾರೆ. ಈಗ ಅಂಗುಲಿಮಾಲನಿಗೆ ಆಘಾತವಾಗುತ್ತದೆ.ಒಮ್ಮೆ ಕಿತ್ತ ಎಲೆಗಳನ್ನು ಮತ್ತೆ ಹೇಗೆ ಮರದಲ್ಲಿ ಇಡಲು ಸಾಧ್ಯ? ಎಂದು ಬುದ್ಧನನ್ನೇ ಪ್ರಶ್ನಿಸುತ್ತಾನೆ. ಆಗ ಬುದ್ಧ ಹೇಳುತ್ತಾನೆ "ಜೀವ ತೆಗೆಯುವುದು ತುಂಬಾ ಸುಲಭ. ಆದರೆ ಜೀವ ನೀಡುವುದು ಅಷ್ಟೇ ಕಷ್ಟ"ಎಂದು ತಿಳಿ ಹೇಳುತ್ತಾರೆ.
ಅವರ ಮಾತಿನ ಅಂತರ್ಯವನ್ನು ಅರ್ಥ ಮಾಡಿಕೊಂಡ ಅಂಗುಲಿಮಾಲ ಅವರ ಶಿಷ್ಯನಾಗುತ್ತಾನೆ. ತನ್ನ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ  ಪಡುತ್ತಾನೆ.

Thursday, 1 February 2018

ಅಷ್ಟಾಂಗ ಮಾರ್ಗ


ಬುದ್ಧನ ಮಧ್ಯಮ ಮಾರ್ಗ ಅಥವಾ ಅಷ್ಟಾಂಗ ಮಾರ್ಗಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿವೆ.
1 ಸಮ್ಯಕ್ ದೃಷ್ಟಿ

ಅಂದರೆ ಮನುಷ್ಯನ ಕೊನೆಯಿಲ್ಲದ ಬೇಡಿಕೆಗಳು, ಲೋಭ, ದುರಾಸೆ ಮತ್ತು ಸ್ವಾರ್ಥ ಇವುಗಳನ್ನು ನಿರಾಕರಿಸುವುದರ ಮೂಲಕ ನಾವು ಕಂಡುಕೊಳ್ಳಬಹುದಾದ ಮನಸ್ಸಿನ ಶಾಂತಿಯ ಮಾರ್ಗ.
ಸಮ್ಯಕ್ ಸಂಕಲ್ಪ

ಬುದ್ಧನ ಪ್ರಕಾರ ಮನುಷ್ಯನಲ್ಲಿ ಕೇವಲ ಒಳ್ಳೆಯ ಚಿಂತನೆಗಳಿದ್ದರೆ ಸಾಲದು, ಅವುಗಳನ್ನು ಅನುಷ್ಠಾನಕ್ಕೆ ತರುವಂಥ ಸಂಕಲ್ಪವಿರಬೇಕು.
3 ಸಮ್ಯಕ್ ವಚನ

ವ್ಯಕ್ತಿಯೊಬ್ಬ ತನ್ನ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಬಳಸುವ ಭಾಷೆಯಲ್ಲಿ ಎಚ್ಚರವಿರಬೇಕು. ಬಸವಣ್ಣ ಪ್ರತಿಪಾದಿಸಿದ “ಕಳಬೇಡ/ ಕೊಲಬೇಡ/ಹುಸಿಯ ನುಡಿಯಲು ಬೇಡ” ವಚನದ ಸಾಲುಗಳು ಬುದ್ಧನ ಚಿಂತನೆಯನ್ನು ಪ್ರತಿಪಾದಿಸುತ್ತವೆ. ಸುಳ್ಳಿನ ಮಾತುಗಳು ಮತ್ತು ಜಗಳಗಳಿಂದ ಸಂಘ ನಾಶವಾಗುತ್ತದೆ, ಹಿತಕರವಾದ ಮಾತುಗಳಿಂದ ಸ್ನೇಹ ಸಂಬಂಧಗಳು ಊರ್ಜಿತಗೊಳ್ಳುತ್ತವೆ.
ಸಮ್ಯಕ್ ಕರ್ಮ

ವ್ಯಕ್ತಿ ತಾನು ಪಡೆದ ಶಿಕ್ಷಣ ಅಥವಾ ಜ್ಞಾನ ಇವುಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಇದು ಆತನ ಸದಭಿರುಚಿಯ ನಡುವಳಿಕೆ ಮಾರ್ಗವಾಗುವುದರ ಮೂಲಕ ಶಾಂತಿಯುತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಆತನೊಳಗಿನ ಕೆಟ್ಟಗುಣಗಳು ನಾಶವಾಗುತ್ತವೆ.
ಸಮ್ಯಕ್ ಜೀವನ

ಸಮ್ಯಕ್ ಜೀವನದ ಮೂಲಕ ಮನುಷ್ಯ ಹಿಂಸೆಯನ್ನು ತೊರೆದು ತ್ಯಾಗ ಜೀವನವನ್ನು ಅನುಸರಿಸಬೇಕೆಂದು ಪ್ರತಿಪಾದಿಸಿದ ಬುದ್ಧ , ತಾನು ಬದುಕಿದ್ದ ಕಾಲಘಟ್ಟದ ಸಮಾಜದ ಹಿಂಸೆ, ದರೋಡೆ ಇವುಗಳಿಂದ ನೊಂದು, ಮನುಷ್ಯ ಇತರರನ್ನು ದೋಚುವುದು ಇಲ್ಲವೆ, ಶೋಷಿಸುವುದನ್ನು ತೊರೆದು ಶ್ರಮದ ಸೂತ್ರಗಳನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ಇತ್ತನು.

ಸಮ್ಯಕ್ ವ್ಯಾಯಾಮ

ಉದ್ದೇಶಿತ ಗುರಿ ಸಾಧನೆಗೆ ಆರೋಗ್ಯ ಮುಖ್ಯ ಎಂದು ನಂಬಿದ್ದ ಬುದ್ಧನು ವ್ಯಾಯಾಮವನ್ನು ಪ್ರೋತ್ಸಾಹಿಸುವುದನು. ಇದರ ಜೊತೆಗೆ ತನ್ನ ಶಿಷ್ಯರಿಗೆ ಮತ್ತು ಪ್ರಜೆಗಳಿಗೆ ಸಾಮೂಹಿಕವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕ್ಕೆ ಒಳ್ಳೆಯದೆಂದು ಬೋಧಿಸಿದನು.
ಸಮ್ಯಕ್ ಸ್ಮೃತಿ

ಬುದ್ಧನ ದೃಷ್ಟಿಕೋನದಲ್ಲಿ ಉತ್ತಮ ಆಲೋಚನಾ ಗುಣಗಳಿದ್ದಾಗ ಮಾತ್ರ ಸದುದ್ದೇಶಗಳು ಇರಲು ಸಾಧ್ಯ. ಇಂತಹ ಉದಾತ್ತ ಚಿಂತನೆಗಳು ಮನುಷ್ಯನನ್ನು ಸಂಘ ಜೀವಿ ಮಾಡುವುದಲ್ಲದೆ, ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು.
ಸಮ್ಯಕ್ ಸಮಾಧಿ

ಅಂದರೆ, ಪ್ರಾಪಂಚಿಕ ಸುಖ ಮತ್ತು ಭೋಗಗಳಿಂದ ವಿಮುಖನಾಗಿ ತನ್ನ ಇಂದ್ರಿಯಗಳನ್ನು ನಿಗ್ರಹಿಸಿಕೊಂಡಾಗ ಮಾತ್ರ ಮನುಷ್ಯನಿಗೆ ಉಲ್ಲಾಸ ಅಥವಾ ನಿಜವಾದ ನೆಮ್ಮದಿ ದೊರೆಯಲು ಸಾಧ್ಯ.

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ. 2. ಕೆಲವು ವೇಳೆ  ಕಾರಣಕ್...