Thursday, 1 February 2018

ಅಷ್ಟಾಂಗ ಮಾರ್ಗ


ಬುದ್ಧನ ಮಧ್ಯಮ ಮಾರ್ಗ ಅಥವಾ ಅಷ್ಟಾಂಗ ಮಾರ್ಗಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿವೆ.
1 ಸಮ್ಯಕ್ ದೃಷ್ಟಿ

ಅಂದರೆ ಮನುಷ್ಯನ ಕೊನೆಯಿಲ್ಲದ ಬೇಡಿಕೆಗಳು, ಲೋಭ, ದುರಾಸೆ ಮತ್ತು ಸ್ವಾರ್ಥ ಇವುಗಳನ್ನು ನಿರಾಕರಿಸುವುದರ ಮೂಲಕ ನಾವು ಕಂಡುಕೊಳ್ಳಬಹುದಾದ ಮನಸ್ಸಿನ ಶಾಂತಿಯ ಮಾರ್ಗ.
ಸಮ್ಯಕ್ ಸಂಕಲ್ಪ

ಬುದ್ಧನ ಪ್ರಕಾರ ಮನುಷ್ಯನಲ್ಲಿ ಕೇವಲ ಒಳ್ಳೆಯ ಚಿಂತನೆಗಳಿದ್ದರೆ ಸಾಲದು, ಅವುಗಳನ್ನು ಅನುಷ್ಠಾನಕ್ಕೆ ತರುವಂಥ ಸಂಕಲ್ಪವಿರಬೇಕು.
3 ಸಮ್ಯಕ್ ವಚನ

ವ್ಯಕ್ತಿಯೊಬ್ಬ ತನ್ನ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಬಳಸುವ ಭಾಷೆಯಲ್ಲಿ ಎಚ್ಚರವಿರಬೇಕು. ಬಸವಣ್ಣ ಪ್ರತಿಪಾದಿಸಿದ “ಕಳಬೇಡ/ ಕೊಲಬೇಡ/ಹುಸಿಯ ನುಡಿಯಲು ಬೇಡ” ವಚನದ ಸಾಲುಗಳು ಬುದ್ಧನ ಚಿಂತನೆಯನ್ನು ಪ್ರತಿಪಾದಿಸುತ್ತವೆ. ಸುಳ್ಳಿನ ಮಾತುಗಳು ಮತ್ತು ಜಗಳಗಳಿಂದ ಸಂಘ ನಾಶವಾಗುತ್ತದೆ, ಹಿತಕರವಾದ ಮಾತುಗಳಿಂದ ಸ್ನೇಹ ಸಂಬಂಧಗಳು ಊರ್ಜಿತಗೊಳ್ಳುತ್ತವೆ.
ಸಮ್ಯಕ್ ಕರ್ಮ

ವ್ಯಕ್ತಿ ತಾನು ಪಡೆದ ಶಿಕ್ಷಣ ಅಥವಾ ಜ್ಞಾನ ಇವುಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಇದು ಆತನ ಸದಭಿರುಚಿಯ ನಡುವಳಿಕೆ ಮಾರ್ಗವಾಗುವುದರ ಮೂಲಕ ಶಾಂತಿಯುತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಆತನೊಳಗಿನ ಕೆಟ್ಟಗುಣಗಳು ನಾಶವಾಗುತ್ತವೆ.
ಸಮ್ಯಕ್ ಜೀವನ

ಸಮ್ಯಕ್ ಜೀವನದ ಮೂಲಕ ಮನುಷ್ಯ ಹಿಂಸೆಯನ್ನು ತೊರೆದು ತ್ಯಾಗ ಜೀವನವನ್ನು ಅನುಸರಿಸಬೇಕೆಂದು ಪ್ರತಿಪಾದಿಸಿದ ಬುದ್ಧ , ತಾನು ಬದುಕಿದ್ದ ಕಾಲಘಟ್ಟದ ಸಮಾಜದ ಹಿಂಸೆ, ದರೋಡೆ ಇವುಗಳಿಂದ ನೊಂದು, ಮನುಷ್ಯ ಇತರರನ್ನು ದೋಚುವುದು ಇಲ್ಲವೆ, ಶೋಷಿಸುವುದನ್ನು ತೊರೆದು ಶ್ರಮದ ಸೂತ್ರಗಳನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ಇತ್ತನು.

ಸಮ್ಯಕ್ ವ್ಯಾಯಾಮ

ಉದ್ದೇಶಿತ ಗುರಿ ಸಾಧನೆಗೆ ಆರೋಗ್ಯ ಮುಖ್ಯ ಎಂದು ನಂಬಿದ್ದ ಬುದ್ಧನು ವ್ಯಾಯಾಮವನ್ನು ಪ್ರೋತ್ಸಾಹಿಸುವುದನು. ಇದರ ಜೊತೆಗೆ ತನ್ನ ಶಿಷ್ಯರಿಗೆ ಮತ್ತು ಪ್ರಜೆಗಳಿಗೆ ಸಾಮೂಹಿಕವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕ್ಕೆ ಒಳ್ಳೆಯದೆಂದು ಬೋಧಿಸಿದನು.
ಸಮ್ಯಕ್ ಸ್ಮೃತಿ

ಬುದ್ಧನ ದೃಷ್ಟಿಕೋನದಲ್ಲಿ ಉತ್ತಮ ಆಲೋಚನಾ ಗುಣಗಳಿದ್ದಾಗ ಮಾತ್ರ ಸದುದ್ದೇಶಗಳು ಇರಲು ಸಾಧ್ಯ. ಇಂತಹ ಉದಾತ್ತ ಚಿಂತನೆಗಳು ಮನುಷ್ಯನನ್ನು ಸಂಘ ಜೀವಿ ಮಾಡುವುದಲ್ಲದೆ, ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು.
ಸಮ್ಯಕ್ ಸಮಾಧಿ

ಅಂದರೆ, ಪ್ರಾಪಂಚಿಕ ಸುಖ ಮತ್ತು ಭೋಗಗಳಿಂದ ವಿಮುಖನಾಗಿ ತನ್ನ ಇಂದ್ರಿಯಗಳನ್ನು ನಿಗ್ರಹಿಸಿಕೊಂಡಾಗ ಮಾತ್ರ ಮನುಷ್ಯನಿಗೆ ಉಲ್ಲಾಸ ಅಥವಾ ನಿಜವಾದ ನೆಮ್ಮದಿ ದೊರೆಯಲು ಸಾಧ್ಯ.

No comments:

Post a Comment

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ. 2. ಕೆಲವು ವೇಳೆ  ಕಾರಣಕ್...